ಮಂಗಳವಾರ, ಜೂನ್ 21, 2011

ಶ್ರೀ ಗಾಯಿತ್ರಿದೇವಿ ಸಿದ್ಧಿವಿನಾಯಕ ದೇವಸ್ಥಾನ, ಮಂಗಳೂರು


     ಮಂಗಳೂರು ಪಂಚಮಹಾಶಕ್ತಿ ಶ್ರೀ ಗಾಯಿತ್ರಿ ದೇವಿ ಸಿದ್ಧಿವಿನಾಯಕ ದೇವಾಲಯದಲ್ಲಿ ದಿ. 24-04-2011ರಂದು ನಡೆದ ಶ್ರೀ ಮಹಾಶಕ್ತಿ ಶ್ರೀ ಗಾಯಿತ್ರಿ ಲಕ್ಷ ಜಪಯಾಗ ಮತ್ತು ವಿಶೇಷ ಹೂವಿನ ಪೂಜೆಯಲ್ಲಿ ದೈವಜ್ಞ ಬ್ರಾಹ್ಮಣ ಮಠಾಧೀಶರಾದ  ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾ ಸ್ವಾಮಿಯವರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರುಗಿತು. ಆ ದಿವಸ ದೇವಾಲಯದಲ್ಲಿ ಶ್ರೀ ಸೂರ್ಯಕಾಂತ ಶೇಟ್ ಇವರಿಗೆ ``ದೈವಜ್ಞ ಶ್ರಮ ರತ್ನ'' ಪ್ರಶಸ್ತಿ ನೀಡಿ ಗೌರವಿಸಿದರು.. ಮತ್ತು ಶ್ರೀ ಎಸ್. ರಮಾನಂದ ಶೇಟ್ ಇವರಿಗೂ ಅವರ ಸೇವೆಯನ್ನು ಪರಿಗಣಿಸಿ ಸನ್ಮಾನ ಪತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಎಂ. ರಮೇಶಕೃಷ್ಣ ಶೇಟ್, ಮೊಕ್ತೇಸರರಾದ ಶ್ರೀ ದೇವರಾಯ ಶೇಟ್ ಆದಿ ಗಣ್ಯರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ