ಶುಕ್ರವಾರ, ಮೇ 20, 2011

ಹುಬ್ಬಳ್ಳಿ ಶ್ರೀ ಕಾಶೀವೆಂಕಟರಮಣ ದೇವರ ಪ್ರಥಮ ವರ್ಧಂತಿ
ಹುಬ್ಬಳ್ಳಿ ಶ್ರೀ ಕಾಶೀವೆಂಕಟರಮಣ ದೇವರ ಪ್ರಥಮ ವರ್ಧಂತಿ ಉತ್ಸವವು ದಿನಾಂಕ: 05-04-2011ರಿಂದ 11-04-2011ರ ತನಕ ಶ್ರೀ ಕಾಶೀಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟಶಿಷ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ಮಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಅಪಾರ ಸಮಾಜ ಬಾಂಧವರ ಪಾಲ್ಗೊಳ್ಳುವಿಕೆಯ ಮೂಲಕ ವಿಜೃಂಭಣೆಯಿಂದ ಸಂಪನ್ನವಾಯಿತು. ಈ ಸಂದರ್ಭದಲ್ಲಿ ಪ|ಪೂ| ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ದೇವಸ್ಥಾನದಲ್ಲಿ  ಲಘುವಿಷ್ಣು ಹವನ, ಶ್ರೀ ಲಕ್ಷ್ಮೀನಾರಾಯಣ ಹೃದಯ ಹವನ, ಮುದ್ರಾಧಾರಣ, ಶ್ರೀ ವೆಂಕಟರಮಣ ದೇವರಿಗೆ ಶತಕಲಶಾಭಿಷೇಕ, ಪಂಚಾಮೃತಾಭಿಷೇಕ, ಎಳನೀರ ಅಭಿಷೇಕ, ಪವಮಾನ ಆದಿ ಅಭಿಷೇಕಗಳು ನಡೆದವು. ರಂಗಪೂಜ, ವಿಶೇಷ ಸರ್ವಾಲಂಕಾರಗಳು ಜನಮನ ಸೂರೆಗೊಂಡವು.
ಇದೇ ವೇಳೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜಿ.ಎಸ್.ಬಿ. ಸಮಾಜದ ಮಕ್ಕಳು ಪ್ರಸ್ತುತ ಪಡಿಸಿದ ನೃತ್ಯರೂಪಕ ``ಪುಣ್ಯಕೋಟಿ'', ಭರತನಾಟ್ಯ ಪ್ರದರ್ಶಿತಗೊಂಡವು. ಶ್ರೀ ರಘುನಂದನ ಭಟ್, ಶ್ರೀ ಶಂಕರ ಶ್ಯಾನುಭಾಗ, ಮಹಾಲಕ್ಷ್ಮೀ ಶೆಣೈ ಕಾರ್ಕಳ ಇವರಿಂದ ಭಕ್ತಿಸಂಗೀತ, ಶ್ರೀ ವೆಂಕಟರಮಣ ಭಜನಾ ಮಂಡಳಿ, ಹುಬ್ಬಳ್ಳಿ, ಶ್ರೀ ವೀರವೆಂಕಟೇಶ ಭಜನ ಮಂಡಳಿ ಮಂಗಳೂರು ಇವರಿಂದ ಭಜನಾ ಕಾರ್ಯಕ್ರಮಗಳು ನಡೆದವು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ