ಶುಕ್ರವಾರ, ಜುಲೈ 22, 2011

ಗೌಡ ಸಾರಸ್ವತ ಬ್ರಾಹ್ಮಣ ಸಮಾಜ, ಧಾರವಾಡ

ಶ್ರಾವಣ ಮಾಸದಲ್ಲಿ ಜಿ.ಎಸ್.ಬಿ.ಸಮಾಜ ಧಾರವಾಡ ಇಲ್ಲಿ ಜರಗುವ ಕಾರ್ಯಕ್ರಮಗಳು
1. 71ನೇ ವಾರ್ಷಿಕ ಸರ್ವ ಸಾಧಾರಣ ಸಭಾ :
     ಧಾರವಾಡ ಸಮಾಜದ 2010-11ನೇ ಸಾಲಿನ 71ನೇ ವಾರ್ಷಿಕ ಷರ್ವ ಸಾಧಾರಣ ಸಭೆಯು ತಾ. 07-08-2011ರಂದು ರವಿವಾರ ಬೆಳಿಗ್ಗೆ 11 ಗಂಟೆಗೆ ಸಮಾಜದ ಸಭಾಗೃಹ ``ಸರಸ್ವತಿ ನಿಕೇತನ''ದಲ್ಲಿ ಜರುಗಲಿದೆ. ಸ್ವಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಹಾಜರಾಗ ಬೇಕಾಗಿ ವಿನಂತಿ ಇದೆ.

2. ಶ್ರೀ ವರಮಹಾಲಕ್ಷ್ಮೀ ವೃತ :
     ಪ್ರತಿ ವರ್ಷದಂತೆ ಶ್ರೀ ವರಮಹಾಲಕ್ಷ್ಮೀ ವೃತವನ್ನು ತಾ. 12-08-2011ರಂದು ಶುಕ್ರವಾರ ಸಂಜೆ 5ಕ್ಕೆ ಆಚರಿಸಲಾಗುವದು.

3. ಋಗುಪಾಕರ್ಮ ಹೋಮ:
     ಋಗುಪಾಕರ್ಮಹೋಮ,  ಯಜ್ಞೋಪವೀತ ಧಾರಣೆಯನ್ನು ಸಮಾಜ ಮಂದಿರದಲ್ಲಿ ತಾ. 13-08-2011ರಂದು ಬೆಳಿಗ್ಗೆ 6-30ಕ್ಕೆ ಆಯೋಜಿಸಲಾಗಿದೆ. ಹೋಮದಲ್ಲಿ ಭಾಗವಹಿಸುವವರು ಸ್ವಲ್ಪ ಅಕ್ಕಿ, ಹಣ್ಣುಕಾಯಿ ತರಬೇಕು.

4. ಸ್ವಾತಂತ್ರ್ಯ ದಿನಾಚರಣೆ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ
  ವೃತ ಪೂಜೆ :
    ಸಮಾಜದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ತಾ. 15-08-2011ರಂದು ಧ್ವಜಾರೋಹಣ, ಸಿಹಿತಿಂಡಿ ವಿತಕಣೆಯೊಂದಿಗೆ ಬೆಳಿಗ್ಗೆ 9-30ಕ್ಕೆ ಆಚರಿಸಲಾಗುವದು. ಮತ್ತು ಅದೇ ದಿನ 10ಕ್ಕೆ  ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ ಪೂಜಾ ಜರುಗಲಿದೆ. ಈ ಸಂದರ್ಭದಲ್ಲಿ  ಹತ್ತುಸಮಸ್ತರ ಪ್ರಾರ್ಥನೆ, 108 ಕಲಶ ಪೂಜಾ, ನೈವೇಧ್ಯ, ಮಂಗಳಾರತಿ, ಪ್ರಸಾದ ವಿತರಣೆ, ಸಮಾರಾಧನೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.

5. ಶ್ರೀ ಕೃಷ್ಣ ಜನ್ಮಾಷ್ಟಮಿ
     ದಿನಾಂಕ. 21-08-2011ರಂದು ಸಂಜೆ 6-30ಕ್ಕೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪೂಜೆಯು ಆರಂಭವಾಗಲಿದೆ. ಭಾಗವಹಿಸುವವರು ತುಳಸೀದಳ, ಹಣ್ಣುಕಾಯಿ, ನೈವೇದ್ಯ ತರಬೇಕು.

6. ಚೂಡಿವಿನಿಮಯ, ಅರಶಿಣ-ಕುಂಕುಮ
ತಾ. 28-08-2011ರಂದು ಮಹಿಳೆಯರಿಗಾಗಿ ಅರಶಿಣ-ಕುಂಕುಮ ಕಾರ್ಯಕ್ರಮ ``ಚೂಡಿ'' ವಿನಿಮಯ ಮತ್ತು  ಚೂಡಿ ಸ್ಪರ್ಧೆ ನೆಡೆಯಲಿದೆ.

    ಸಮಾಜದ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಧಾರವಾಡದ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿ ಇದೆ.

ಹೆಚ್ಚಿನ ಮಾಹಿತಿಗಾಗಿ ಸಮಾಜದ ಕಛೇರಿ (ಸರಸ್ವತಿ ನಿಕೇತನ)
ಪೋನ್ ನಂ. 0836-2440230 ಇಲ್ಲಿಗೆ ಸಂಪರ್ಕಿಸಿರಿ

ಬುಧವಾರ, ಜುಲೈ 13, 2011

ಹಿರಂಕಿ ಕಿಣಿಯಾಂಗೆಲೆ ಸಮ್ಮೇಳನ
ಅಡ್ಯಾರ ಗೋಪಾಳ ಪರಿವಾರಾಚೆ ಏಕ ವಿಶೇಷ ಸಮಾವೇಶ